ಬೇವುಲ್ಫ- ಮಧ್ಯಯುಗೀನ ಕಾಲದ ನಾಯಕ. ಪ್ರಾಚೀನ ಆಂಗ್ಲ ಜಾನಪದೀಯ ಪುರಾಣದಲ್ಲಿ ಬರುವ ಕಥೆ ಇದು. ಮಾನೆಸ್ಟರ್ ಗ್ರಾಂಡೆಲ್, ಆತನ ತಾಯಿ ಹಾಗೂ ಕ್ರೂರಿ ಡ್ಯ್ರಾಗನ್ ನೊಂದಿಗೆ ಬೇವುಲ್ಫ ನಡೆಸುವ ಜೀವನ ಹಾಗೂ ಹೋರಾಟವನ್ನು ಇಲ್ಲಿ ಚಿತ್ರಿಸಲಾಗಿದೆ.
ಕನ್ನಡ ಸಾಹಿತ್ಯದ ಅಪೂರ್ವ ಕೃತಿ ರನ್ನನ ಗದಾಯುದ್ಧ ಇಲ್ಲವೇ ಕಾಳಿಂಗ ಸರ್ಪವನ್ನು ಕೊಲ್ಲುವ ಕೃಷ್ಣನ ಪ್ರಸಂಗವು ‘ಬೇವುಲ್ಫ’ ಜೀವನ ಹಾಗೂ ಹೋರಾಟವನ್ನು ನೆನಪಿಸುತ್ತದೆ. ಸಾಹಿತ್ಯ ಹಾಗೂ ಪೌರಾಣಿಕ ಅಧ್ಯಯನದ ದೃಷ್ಟಿಯಿಂದ ಈ ಕೃತಿ ಮಹತ್ವದ್ದು. ಡಾ. ಬಸವರಾಜ ನಾಯ್ಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.